ಅಂಕೋಲಾ: ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಕೊಡಿಸುವುದಾಗಿ ಮುಂಗಡವಾಗಿ 3.75 ಲಕ್ಷ ರೂಪಾಯಿ ಹಣ ಪಡೆದು ಲ್ಯಾಪ್ಟಾಪ್ ನೀಡದೇ ಹಣ ಮರಳಿಸದೆ ವಂಚನೆ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವರ ಮೇಲೆ ದೂರು ದಾಖಲಾಗಿದೆ. ತಾಲೂಕಿನ ಬೆಳಂಬಾರ ಮಧ್ಯ ಖಾರ್ವಿವಾಡದ ಜಗದೀಶ ಯಶ್ವಂತ ಖಾರ್ವಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ ಸುಹಾಸ್ ಬಿ ಎಸ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಯು ದೂರುದಾರರು ಕಾಂಗ್ರೆಸ್ ಕಚೇರಿಯಲ್ಲಿದ್ದಾಗ ಕಚೇರಿಗೆ ಬಂದು ಸುಹಾಸ್ ಬಿಎಸ್ ಎಂದು ಪರಿಚಯಿಸಿಕೊಂಡು ಬೆಂಗಳೂರಿನಲ್ಲಿ ಎನ್.ಜಿ.ಓ ನಡೆಸುತ್ತಿದ್ದು ಕಡಿಮೆ ಬೆಲೆಗೆ ಎಲ್ಲಾ ಕಂಪನಿಯ ಲ್ಯಾಪ್ಟಾಪ್ಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ. ಅದನ್ನು ನಂಬಿದ ದೂರುದಾರ ಡೆಲ್ ಕಂಪನಿಯ 15 ಲ್ಯಾಪ್ಟಾಪ್ಗಳನ್ನು ಆರ್ಡರ್ ಮಾಡಿ ಮುಂಗಡವಾಗಿ ಆರೋಪಿಯ ಖಾತೆಗೆ ಹಣವನ್ನು ಸಂದಾಯ ಮಾಡಿದ್ದು ಇಲ್ಲಿಯವರೆಗೆ ಲ್ಯಾಪ್ಟಾಪ್ ನೀಡದೇ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.