Flash News
Saturday, February 14, 2026
Logo Flash News
Saturday, February 14, 2026
Logo
ಕಾಳಿ ನದಿ ತಟದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ವಿಫಲವಾದ ಜಿಲ್ಲಾಡಳಿತ.

ಕಾಳಿ ನದಿ ತಟದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ವಿಫಲವಾದ ಜಿಲ್ಲಾಡಳಿತ.

January 12, 2026   |   Flash News

ಕಾರವಾರ: ಸ್ಥಳೀಯ ಕಟ್ಟಡ ನಿರ್ಮಾಣ ಮಾಲೀಕರಿಗೆ ಉಸುಕಿನ ಕೊರತೆಯಾಗಿದ್ದು ಉಸುಕಿನ ಅಳತೆಯಲ್ಲೂ ಮೋಸವಾಗುತ್ತಿದೆ. ಈ ನಡುವೆ ಹೆಚ್ಚಿನ ಹಣದ ಆಸೆಗೆ ಗೋವಾ ಹುಬ್ಬಳ್ಳಿಗೆ ಮರಳು ಸಾಗಾಟ ಮಾಡುವ ಜಾಲವು ಸಕ್ರಿಯವಾಗಿದ್ದು ಆಡಳಿತ ಮಾತ್ರ ಸುಮ್ಮನಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಾರವಾರದ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ದಂಧೆ ನಡೆಯುತ್ತಿದೆ. ಬಡವರು ಹೊಟ್ಟೆಪಾಡಿಗಾಗಿ ಹಾಗೂ ಸ್ಥಳೀಯ ಕಟ್ಟಡಕ್ಕಾಗಿ ಅಕ್ರಮ ಮರಳು ದಂಧೆ ಮಾಡುತ್ತಾರೆಂದು ಹೇಳುವ ಅಧಿಕಾರಿಗಳು ಗೋವಾ ಹುಬ್ಬಳ್ಳಿ ಸಾಗಾಟು ಮಾಡುವಾಗ ಸುಮ್ಮನಿರುವ ಜರೂರತ್ತು ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ರಾಜಕೀಯ ಒತ್ತಡಕ್ಕೆ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಯಿತೇ ಜಿಲ್ಲಾಡಳಿತ? ಎನ್ನುವ ಸಂಶಯ ಮೂಡಿದೆ. ಸ್ಥಳೀಯರಿಗೆ ಕನಿಷ್ಠ ದರದೊಂದಿಗೆ ಸರಿಯಾದ ಅಳತೆಯ ಉಸುಕು ದೊರಕಿಸಿ ಕೊಡುವಂತೆ ಸಹ ಸಾರ್ವಜನಿಕರ ಆಗ್ರಹವಿದೆ. ಅಕ್ರಮ ದಂದೆಯ ಕುರಿತು ಹಲವಾರು ಬಾರಿ  ದೂರು ನೀಡಿದರೂ  ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.