ಅಂಕೋಲಾ: ನ್ಯಾಯಕ್ಕಾಗಿ ಒಂದು ವಾರದಿಂದ ವಕೀಲ ನಾಗರಾಜ ನಾಯಕ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ರವಿಕುಮಾರ ಬಿಜೆಪಿ ವತಿಯಿಂದ ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ವಕೀಲ ನಾಗರಾಜ ನಾಯಕರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಕೀಲ ನಾಗರಾಜ ನಾಯಕ ಅವರ ಮೇಲೆ ದೌರ್ಜನ್ಯ ಎಸಗಲು ಕಾರಣವಾದವರ ವಿರುದ್ಧ ಸೂಕ್ತ ತನಿಖೆಯಾಗಬೇಕು. ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನಾಗರಾಜ ನಾಯಕರಿಗೆ ರಕ್ಷಣೆ ನೀಡಬೇಕು ಇದು ಬಿಜೆಪಿ ಆಗ್ರಹವಾಗಿದೆ. ಅವರು ಒಂದು ವಾರದಿಂದ ಧರಣಿ ನಿರತರಾಗಿದ್ದಾರೆ ಎಂದರು. ಪಕ್ಷಾತೀತವಾಗಿ ನಡೆಯುತ್ತಿದ್ದ ನಾಗರಾಜ ನಾಯಕರ ಹೋರಾಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದು, ಸಂಸದರು, ಶಾಸಕರು ಧರಣೀ ಸ್ಥಳಕ್ಕೆ ಆಗಮಿಸಿದ್ದರು. ಇದೀಗ ರಾಜ್ಯ ಬಿಜೆಪಿ ವತಿಯಿಂದ ಬೆಂಬಲ ವ್ಯಕ್ತಪಡಿಸಿದ್ದು ಹೋರಾಟದ ತಿರುವ ಬದಲಾಗುವ ಸಾಧ್ಯತೆಗಳಿವೆ.