ಅಂಕೋಲಾ: ಕಾರವಾರ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ತಾಲೂಕಿನ ಬಾಸಗೋಡದ ನ್ಯಾಯವಾದಿ ನಾಗರಾಜ ವಿ ನಾಯಕ ಆಯ್ಕೆಯಾಗಿದ್ದಾರೆ. ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಶೇ.71ರಷ್ಟು ಮತ ಗಳಿಸುವ ಮೂಲಕ ಮೂವರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಜಯಗಳಿಸಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ನಾಗರಾಜ ದೇಶಭಂಡಾರಿ, ಖಜಾಂಚಿಯಾಗಿ ಪದ್ಮಾ ತಾಂಡೆಲ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಾರುತಿ ನಾಯ್ಕ, ದೀಪಾ ನಾಯ್ಕ ಮತ್ತು ಸುಮಿತಾ ಭೂತೇ ಚುನಾವಣೆಯ ಮೂಲಕ ಆಯ್ಕೆಗೊಂಡಿದ್ದಾರೆ.