Flash News
Friday, September 05, 2025
Logo Flash News
Friday, September 05, 2025
Logo
ಉದ್ಯಮಿ ಯಶೋಧರ ನಾಯ್ಕ ಇನ್ನಿಲ್ಲ.

ಉದ್ಯಮಿ ಯಶೋಧರ ನಾಯ್ಕ ಇನ್ನಿಲ್ಲ.

August 19, 2025   |   Flash News


ಕುಮಟಾ: ಉದ್ಯಮ ಮತ್ತು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ  ಯಶೋಧರ ನಾಯ್ಕ(69) ಅನಾರೋಗ್ಯದಿಂದ ನಿಧನರಾಗಿದ್ದಾರೆ. 
ಮೂಲತ ಹೊನ್ನಾವರ ತಾಲೂಕಿನ ಯಶೋಧರ ನಾಯ್ಕ ಮೈಸೂರು ಜಿಲ್ಲೆಯನ್ನು ಕೇಂದ್ರ ಸ್ಥಾನವಾಗಿಸಿ ಸಾರಿಗೆ ಹಣಕಾಸು ಮತ್ತಿತರ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳ ರಾಜಕೀಯ ಒಡನಾಟದೊಂದಿಗೆ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದ್ದು ಯಶೋಧರ ನಾಯ್ಕ ಟ್ರಸ್ಟ್ ಮೂಲಕ ನೂರಾರು ನೊಂದ ಜನರಿಗೆ ಸೇವೆ ನೀಡಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದು ಪ್ರಮುಖ ರಾಜಕೀಯ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದರು. ಮೈಸೂರು ರಾಜಮನೆತನದ ಹಾಗೂ ಚಿತ್ರರಂಗದ ನಂಟು ಹೊಂದಿದ್ದರು. ಅನಾರೋಗ್ಯದ ಕಾರಣ ಚಿಕಿತ್ಸೆಗೆ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ ಇದ್ದಾರೆ. ಯಶೋಧರ ನಾಯ್ಕ ಅಗಲುವಿಕೆಗೆ ವಿವಿಧ ಕ್ಷೇತ್ರದ ಮುಖಂಡರು ಸಂತಾಪ ಸೂಚಿಸಿದ್ದಾರೆ.

Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

Uttara Kannada National International Crime Politics Bhatkal Honnavar Kumta State Sports Flash News Ankola Siddapura Karwar Sirsi Joida Mundgod Yellapura Haliyal

© 2025 ಜನಮಾಧ್ಯಮ.. All Rights Reserved.