Flash News
Friday, September 05, 2025
Logo Flash News
Friday, September 05, 2025
Logo
ಹುಲಿಯೋ? ಚಿರತೆಯೋ? ಗ್ರಾಮಸ್ಥರ ಆತಂಕ; ಬಂಡೆಯ ಮೇಲೆ ಕಾಣಿಸಿಕೊಂಡಿದ್ದೇನು

ಹುಲಿಯೋ? ಚಿರತೆಯೋ? ಗ್ರಾಮಸ್ಥರ ಆತಂಕ; ಬಂಡೆಯ ಮೇಲೆ ಕಾಣಿಸಿಕೊಂಡಿದ್ದೇನು

August 26, 2025   |   Flash News

ಕಾರವಾರ: ತಾಲೂಕಿನ ಅಮದಳ್ಳಿ ಟೋಲ್‌ನಾಕ ಬಳಿಯಲ್ಲಿ ಅರಣ್ಯ ಪ್ರದೇಶದ ಬಂಡೆಯೊಂದರ ಮೇಲೆ ಸೋಮವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ದೂರದಿಂದಲೇ ಫೋಟೋ ಕ್ಲಿಕ್ಕಿಸಿದ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ದೂರದಿಂದ ಫೋಟೋ ಕ್ಲಿಕ್ಕಿಸಿದಾಗ ಹುಲಿಯಂತೆ ಕಂಡುಬಂದಿದ್ದು ನಮ್ಮೂರಿಗೆ ಹುಲಿ ಬಂದಿದೆ ಎಂಬ ಆತಂಕದಿಂದ ಗ್ರಾಮಸ್ಥರು ಭಯಭೀತರಾದರು. 
ಗ್ರಾಮಸ್ಥರ ಆತಂಕ ಫೋಟೋ ಮೂಲಕ ಹರಡಿದ ಹುಲಿಯ ವದಂತಿ ಅರಣ್ಯ ಇಲಾಖೆಗೆ ತಲುಪಿತು. ಇಲ್ಲಿನ ಅರಣ್ಯ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಹುಲಿ ಕಾಣಿಸಿಕೊಳ್ಳುವುದಿಲ್ಲ. ಫೋಟೋದಲ್ಲಿರುವುದು ಚಿರತೆಯಾಗಿದ್ದು ಗ್ರಾಮಸ್ಥರು ಆತಂಕ ಪಡಬೇಡಿ ಎಂದು ಕಾರವಾರ ಅರಣ್ಯ ವಿಭಾಗದ ಆರ್‌ಎಫ್‌ಒ ಗಜಾನನ ನಾಯ್ಕ ಸ್ಪಷ್ಟಪಡಿಸಿದರು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದೆಂದು ತಿಳಿಸಿದರು.

Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

Uttara Kannada National International Crime Politics Bhatkal Honnavar Kumta State Sports Flash News Ankola Siddapura Karwar Sirsi Joida Mundgod Yellapura Haliyal

© 2025 ಜನಮಾಧ್ಯಮ.. All Rights Reserved.