Flash News
Friday, September 05, 2025
Logo Flash News
Friday, September 05, 2025
Logo

ಪ್ರತ್ಯೇಕ ಪ್ರಕರಣ: ಬೆಂಗಳೂರಿಗೆ ಹೊರಟ ಯುವಕ, ಮನೆಯಿಂದ ಹೊರ ಹೋದ ಯುವತಿ ನಾಪತ್ತೆ

September 03, 2025   |   Flash News

 

ಅಂಕೋಲಾ: ಬಳಲೆಯಿಂದ ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೋರ್ವರು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.

ತಾಲ್ಲೂಕಿನ ಮಾದನಗೇರಿ ಬಳಲೆಯ ಗುರುನಾಥ ನಾಗೇಶ ಗುನಗಾ (35) ನಾಪತ್ತೆಯಾದವರು. ಗುರುನಾಥ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಚಿಕ್ಕಪ್ಪನ ಮಗಳ ಮದುವೆಯ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 16.04.2025ರಂದು ಬೆಂಗಳೂರಿಗೆ ಹೋಗುವುದಾಗಿ ಮನೆಯಿಂದ ಹೊರಟವರು ಈವರೆಗೂ ಮನೆಗೆ ಬಾರದೆ ಸಂಪರ್ಕಕ್ಕೂ ಸಿಗದೆ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಕಾಣೆಯಾಗಿದ್ದು ತನ್ನ ತಮ್ಮನನ್ನು ಹುಡುಕಿ ಕೊಡುವಂತೆ ಸಹೋದರ ರಾಮಕೃಷ್ಣ ಗುನಗಾ ದೂರು ಸಲ್ಲಿಸಿದ್ದಾರೆ. 

ಪ್ರತ್ಯೇಕವಾಗಿ, ರಾತ್ರಿ ಎಂಟರ ವೇಳೆಗೆ ಮನೆಯಿಂದ ಹೊರೆಗೆ ಹೋಗಿ ಬರುವುದಾಗಿ ತಿಳಿಸಿದ ಯುವತಿಯೋರ್ವಳು ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನ ಅಗ್ರಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲಕೇರಿ ಗ್ರಾಮದ ಚಂದ್ರಕಲಾ ನೀಲಕಂಠ ಗೌಡ (20)ನಾಪತ್ತೆಯಾದವರು. ಚಂದ್ರಕಲಾ ದಿನಾಂಕ 1.9.2025ರಂದು ರಾತ್ರಿಯ ವೇಳೆ ಹೊರಗೆ ಹೋಗಿದ್ದು ಇದುವರೆಗೆ ಮನೆಗೆ ಬಾರದೆ ಯಾರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದು ಹುಡುಕಿಕೊಡುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. 

ಕಾಣೆಯಾದವರ ವಿವರ ತಿಳಿದುಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆಯ 08388- 220333 ಸಂಖ್ಯೆಯ ದೂರವಾಣಿಗೆ ತಿಳಿಸಲು ಪೊಲೀಸರು ಕೋರಿದ್ದಾರೆ.


 

Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

Uttara Kannada National International Crime Politics Bhatkal Honnavar Kumta State Sports Flash News Ankola Siddapura Karwar Sirsi Joida Mundgod Yellapura Haliyal

© 2025 ಜನಮಾಧ್ಯಮ.. All Rights Reserved.